Friday 13 July 2012

ಯೋಚನೆ ಮಾಡು ಓ ಮನುಜ


ಯೋಚನೆ ಮಾಡು ಓ ಮನುಜ 
***********************************

ರಾಜಕೀಯ.... ಎಲ್ಲಾ ಸುಳ್ಳು
ರಾಮರಾಜ್ಯ ಕನಸದು ಕೇಳು
ಓಟಿಗೊಂದು ನೋಟು ಆ ದಿನಗಳು
ಓಟಿಗಾಗಿ ಏನೇನೋ ಈ ದಿನಗಳು

ನೀತಿ ನಿಯಮ ಗಾಳಿಗೆ ತೂರಿ
ಬಡವರೆದೆ ಮೇಲೆ ಕಾಲು ಊರಿ
ಕಿತ್ತಾಡುತ ಕೂತರು ಕುರ್ಚಿಯ ಏರಿ
ಎಣಿಸುತ ಜನ ಜನ , ಜಾತಿಯ ಚೂರಿ

ಹಗಲೆಲ್ಲಾ ನನ್ನ ಗುಂಪು , ನಿನ್ನ ಗುಂಪು
ಇರುಳಲ್ಲಿ ಗುಂಪುಗಳೆಲ್ಲಾ ಒಂದೇ ಗುಂಪು
ಏರಿಸಿ ಬೆಲೆಯ ನಾಲ್ಕು ಪಾಲು , ಅದು ತಪ್ಪು
ಇಳಿಸಿ ಎರಡು ಪಾಲು , ಅಯ್ಯೋ ಜನ ಬೆಪ್ಪು

ಯೋಚನೆ ಮಾಡು ಓ ಮನುಜ
ಯಾವುದು ಸರಿ ಯಾವುದು ತಪ್ಪು .. !!

|| ಪ್ರಶಾಂತ್ ಖಟಾವಕರ್ ||

2 comments: