Wednesday 4 July 2012

ಎಚ್ಚರಿಕೆ .. !!!!!



ಎಚ್ಚರಿಕೆ .. !!!!! 
**********************

ಹತ್ತು ಜನರ ಕಿತ್ತು ತಿಂದ
ನೀನೇನಾ ಮಹಾಪ್ರಭು !!
ಮಕ್ಕಳೂಟವನ್ನು ಬಿಡದೇ
ಬಾಚಿಕೊಂಡ ಬಕಾಸುರ !!

ಹೆಸರು ಮಾಡಿ , ಕೆಸರಲ್ಲಾಡಿ
ಮೊಸರ ತಿಂದು ಮೆರೆಯುವ
ನರಿ ಬುದ್ದಿಯ ಅಸುರಾಧಿಪತಿ
ತೋಳಗಳ ಗುಂಪಿನೊಡಯ !!

ರಾಜವೈಭೋಗದಿ ಸುಖವನನುಭವಿಸಿ
ಸಿಕ್ಕ ಸಿಕ್ಕಷ್ಟು ದೋಚಿಕೊಳ್ಳುವ ಕಳ್ಳ !!
ಮಾತು ಮಾತಿನಲ್ಲೇ ಮರಳುಮಾಡಿ
ಮೋಸ ಮಾಡುವ ಚೋರರ ನಾಯಕ !!

ಇನ್ನದೆಷ್ಟು ದಿನಗಳು ಅಬ್ಬರಿಸುವೆ
ಮಹಾರಾಜನೆಂದು ಮೆರೆದಾಡುವೆ
ನಾನಿಳಿಯಲು ರಣರಂಗದೊಳು
ನಿನಗುಳಿಗಾಲವಿಲ್ಲ.... ಎಚ್ಚರಿಕೆ .. !!!!!

|| ಪ್ರಶಾಂತ್ ಖಟಾವಕರ್ ||

No comments:

Post a Comment